ಹರಿಯೋ ಹೊಳೆ ಅಂದರೆ ಏನು?
ಕವಿಗಳು ಹೇಳತಾರೆ --
ಸದಾ ನಿಂತೇ ಇರೋ ಬೆಟ್ಟಕ್ಕೆ
ಓಡಾಡಬೇಕು ಅನ್ನಿಸಿದಾಗ, ಅಥವಾ
ಬಾಯಿಲ್ಲದೆ ಇರುವ ಕಾಡಿಗೆ
ಮಾತಾಡಬೇಕು ಅನ್ನಿಸಿದಾಗ, ಮತ್ತೆ
ನಮ್ಮನ್ನೆಲ್ಲ ಹೊತ್ತ ಭೂಮಿಗೆ
ನಗಬೇಕು ಅನ್ನಿಸಿದಾಗ,
ಆ ಎಲ್ಲ ಆಕಾಂಕ್ಷೆಗಳೇ ಪಡೆಯುವ
ರೂಪ -- ಹೊಳೆ.
ಆದರೆ ಮನುಷ್ಯರ ಅಪೇಕ್ಷೆ
ಅದಕ್ಕೆ ತದ್ವಿರುದ್ಧ.
ಹರಿಯೋ ಹೊಳೆಯನ್ನ
ಒಡ್ಡು ಕಟ್ಟಿ ನಿಲ್ಲಿಸಬೇಕು,
ಅದರ ಕಸುವಿನಲ್ಲಿ ನೀರನ್ನು ಕಡೆದು
ಕರೆಂಟು ಹುಟ್ಟಿಸಬೇಕು -- ಅನ್ನೋದು
ಇವತ್ತಿನ ಮನುಷ್ಯರ ಅಪೇಕ್ಷೆ.
ಹೀಗೆ, ಪಕೃತಿಯ ಆಕಾಂಕ್ಷೆ
ಮತ್ತು ಮನುಷ್ಯರ ಅಪೇಕ್ಷೆ
ಎದರಾಬದರಾ ನಿಂತು
ಗುದಮುರಿಗೆ ಆಡಿದಾಗ
ಹುಟ್ಟಿದ್ದು ನಮ್ಮ ಊರು --
ಹೆಸರು, ಹಳೆಯೂರು.
Additional information
| Number of pages | 88 |
|---|---|
| Year of Publication | 2007 |
| Author | ಅಕ್ಷರ ಕೆ.ವಿ. |
| eBook | https://play.google.com/store/books/details/Akshara_K_V_Swayamvaraloka?id=mAXyDwAAQBAJ |





Reviews
There are no reviews yet.