ಸ್ವಯಂವರಲೋಕ

65.00

SKU: 42 Category:

ಹರಿಯೋ ಹೊಳೆ ಅಂದರೆ ಏನು?

ಕವಿಗಳು ಹೇಳತಾರೆ --

ಸದಾ ನಿಂತೇ ಇರೋ ಬೆಟ್ಟಕ್ಕೆ

ಓಡಾಡಬೇಕು ಅನ್ನಿಸಿದಾಗ, ಅಥವಾ

ಬಾಯಿಲ್ಲದೆ ಇರುವ ಕಾಡಿಗೆ

ಮಾತಾಡಬೇಕು ಅನ್ನಿಸಿದಾಗ, ಮತ್ತೆ

ನಮ್ಮನ್ನೆಲ್ಲ ಹೊತ್ತ ಭೂಮಿಗೆ

ನಗಬೇಕು ಅನ್ನಿಸಿದಾಗ,

ಆ ಎಲ್ಲ ಆಕಾಂಕ್ಷೆಗಳೇ ಪಡೆಯುವ

ರೂಪ -- ಹೊಳೆ.

ಆದರೆ ಮನುಷ್ಯರ ಅಪೇಕ್ಷೆ

ಅದಕ್ಕೆ ತದ್ವಿರುದ್ಧ.

ಹರಿಯೋ ಹೊಳೆಯನ್ನ

ಒಡ್ಡು ಕಟ್ಟಿ ನಿಲ್ಲಿಸಬೇಕು,

ಅದರ ಕಸುವಿನಲ್ಲಿ ನೀರನ್ನು ಕಡೆದು

ಕರೆಂಟು ಹುಟ್ಟಿಸಬೇಕು -- ಅನ್ನೋದು

ಇವತ್ತಿನ ಮನುಷ್ಯರ ಅಪೇಕ್ಷೆ.

ಹೀಗೆ, ಪಕೃತಿಯ ಆಕಾಂಕ್ಷೆ

ಮತ್ತು ಮನುಷ್ಯರ ಅಪೇಕ್ಷೆ

ಎದರಾಬದರಾ ನಿಂತು

ಗುದಮುರಿಗೆ ಆಡಿದಾಗ

ಹುಟ್ಟಿದ್ದು ನಮ್ಮ ಊರು --

ಹೆಸರು, ಹಳೆಯೂರು.

Additional information

Number of pages

88

Year of Publication

2007

Author

ಅಕ್ಷರ ಕೆ.ವಿ.

eBook

https://play.google.com/store/books/details/Akshara_K_V_Swayamvaraloka?id=mAXyDwAAQBAJ

Reviews

There are no reviews yet.

Be the first to review “ಸ್ವಯಂವರಲೋಕ”

Your email address will not be published. Required fields are marked *